top of page
ಹೀಗೊಂದು ಕೃಷಿ ಸಂಹಿತೆ

ಆಧುನಿಕ ರಾಸಾಯನಿಕ ಕೃಷಿಯ ಲೋಪದೋಷಗಳನ್ನು 1920ರ ದಶಕದಲ್ಲೇ ಎತ್ತಿ ತೋರಿಸಿದ ಧೀಮಂತ ಸರ್ ಆಲ್ಬರ್ಟ್ ಹೋವರ್ಡ್. ಬ್ರಿಟಿಷ್ ಮೂಲದ ಹೋವರ್ಡ್ ಅವರು ಮಧ್ಯಪ್ರದೇಶದ ಪೂಸಾ ಕೃಷಿ ವಿಶ್ವವಿದ್ಯಾಲಯದಲ್ಲಿ ನೆಲೆಸಿ, ಭಾರತೀಯ ಕೃಷಿ ಪದ್ಧತಿಗಳನ್ನು ಅರ್ಥ ಮಾಡಿಕೊಂಡು, ಮಣ್ಣಿನ ಆರೋಗ್ಯದ ಬಗ್ಗೆ ಕೆಲಸ ಮಾಡುತ್ತಾರೆ. ಆಧುನಿಕ ಕೃಷಿ ವಿಜ್ಞಾನದಲ್ಲಿ ಭಸ್ಮಾಸುರರಂತೆ ಸೇರಿಕೊಂಡಿರುವ ವಿವಿಧ ತಜ್ಞರು, ವಿವಿಧ ಜೀವಿ ನಾಶಕಗಳನ್ನು ದೂರವಿಡದ ಹೊರತು ಭಾರತೀಯ ಕೃಷಿಗೆ ಉಳಿಗಾಲವಿಲ್ಲ ಎನ್ನುವ ವಿಚಾರಧಾರೆಯ ಮೇಲೆ ನಿಂತಿರುವ ಹೋವರ್ಡ್ ಅವರ ಲೇಖನಗಳು, ಮಣ್ಣಿನ ಜೀವಿಗಳು ಮತ್ತು ಬೆಳೆಗಳ ಜೊತೆಗಿನ ಅವಿನಾಭಾವ ಸಂಬಂಧವನ್ನು ವೈಜ್ಞಾನಿಕವಾಗಿ ವಿವರಿಸುತ್ತದೆ. ಕಂಪೊಸ್ಟ್ ತಯಾರಿಕೆಯಲ್ಲಿ ಇವರ ಸಂಶೋಧನೆಯ ಇಂಡೋರ್ ವಿಧಾನ ಇವತ್ತಿಗೂ ಅತ್ಯುತ್ತಮ, ಪರಿಪೂರ್ಣ ವಿಧಾನವೆಂದು ಪರಿಗಣಿತವಾಗಿದೆ. 15 ಅಧ್ಯಾಯಗಳನ್ನು ಒಳಗೊಂಡಿರುವ ಈ ಪುಸ್ತಕವನ್ನು ವಾಲ್ಮೀಕಿ ಶ್ರೀನಿವಾಸ ಅಯ್ಯಂಗಾರ್ಯ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. 

ಹೀಗೊಂದು ಕೃಷಿ ಸಂಹಿತೆ

₹170.00Price
Quantity
    bottom of page