ನಾರಾಯಣರೆಡ್ಡಿ ಮತ್ತು ಅವರಂತಹ ಇನ್ನೂ ಅನೇಕ ಧೀಮಂತರಿಂದ ಸಾವಯವ ಕೃಷಿ ಕಲಿತೆ ಎಂದು ಹೇಳಿಕೊಳ್ಳುವ ತಮಿಳುನಾಡಿನ ಸತ್ಯಮಂಗಲಂನ ಹೆಸರಾಂತ ಸಾವಯವ ಕೃಷಿಕ ಎಸ್. ಆರ್. ಸುಂದರ್ ರಾಮನ್ ಅವರು ಸಾಧನೆಯ ಹಾದಿಯಲ್ಲಿ ಆ ಗುರುಗಳನ್ನೆಲ್ಲಾ ದಾಟಿ ಬಹು ಮುಂದೆ ನಡೆದವರು. ಇವರ ಮೂರು-ನಾಲ್ಕು ದಶಕಗಳ ತಮ್ಮ ಸಾವಯವ ಕೃಷಿ ಪಯಣದ ಪ್ರತಿ ದಿನವೂ ಹೊಸತೊಂದು ಸಂಶೋಧನೆಯ ಹುಟ್ಟು. ನಿರಂತರ ಸಂಶೋಧನೆ-ಪ್ರಯೋಗಗಳಿಂದ ೫ ದ್ರಾವಣಗಳಲ್ಲಿ ಪಾರಂಗತಿ ಪಡೆದಿದ್ದಾರೆ. ಸದಾ ಜನರ ಮಧ್ಯೆ ಬೆರೆತು ಹೋಗಿರುವ ಸುಂದರ್ ರಾಮನ್ ಅವರು ತಮ್ಮ ಸಂಶೋಧನೆಯ ದ್ರಾವಣಗಳ ತಯಾರಿಕೆ ಮತ್ತು ಬಳಕೆಯ ಬಗ್ಗೆ ರಾಜ್ಯ-ರಾಜ್ಯಗಳ ನಡುವೆ ಬಿಡುವಿಲ್ಲದಂತೆ ಓಡಾಡುತ್ತಾ ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಡುತ್ತಾರೆ. ಈ ದೇಶದ ಯಾವುದೇ ಭಾಗದಲ್ಲಿ ಬೆಳೆಯುವ ಯಾವುದೇ ಬೆಳೆಯ ಸಂಮೃದ್ಧ ಸಾವಯವ ಕೃಷಿಗೆ ಸುಂದರ್ ರಾಮನ್ ಅವರಲ್ಲಿ ಸರಳ ಸೂತ್ರವಿದೆ. ಅವರ ಪ್ರಾತ್ಯಕ್ಷಿಯ ಸಂದರ್ಭದಲ್ಲೇ ದಾಖಲಿಸಿ ಭಟ್ಟಿ ಇಳಿಸಿ ಸಿದ್ಧಪಡಿಸಿದ ಈ ಪುಸ್ತಿಕೆ ಸುಂದರ್ ರಾಮನ್ ಅವರ ಸಂಶೋಧನೆಯ ದ್ರಾವಣಗಳಿಗೆ ಕೈಪಿಡಿಯಾಗಿದೆ. ಸ್ವತಃ ಸುಂದರ್ ರಾಮನ್ ಅವರೇ ಪಕ್ಕದಲ್ಲಿ ನಿಂತು ಹೇಳಿಕೊಡುತ್ತಿರುವ ಅನುಭವ ಇಲ್ಲಿ ಸಿಗುತ್ತದೆ.
top of page
₹45.00Price
bottom of page
