top of page
ಸಾವಯವ ಸಸ್ಯ ಸಂರಕ್ಷಣೆಗೆ ಸರಳ ಸೂತ್ರಗಳು

ನಾರಾಯಣರೆಡ್ಡಿ ಮತ್ತು ಅವರಂತಹ ಇನ್ನೂ ಅನೇಕ ಧೀಮಂತರಿಂದ ಸಾವಯವ ಕೃಷಿ ಕಲಿತೆ ಎಂದು ಹೇಳಿಕೊಳ್ಳುವ ತಮಿಳುನಾಡಿನ ಸತ್ಯಮಂಗಲಂನ ಹೆಸರಾಂತ ಸಾವಯವ ಕೃಷಿಕ ಎಸ್. ಆರ್. ಸುಂದರ್ ರಾಮನ್ ಅವರು ಸಾಧನೆಯ ಹಾದಿಯಲ್ಲಿ ಆ ಗುರುಗಳನ್ನೆಲ್ಲಾ ದಾಟಿ ಬಹು ಮುಂದೆ ನಡೆದವರು. ಇವರ ಮೂರು-ನಾಲ್ಕು ದಶಕಗಳ ತಮ್ಮ ಸಾವಯವ ಕೃಷಿ ಪಯಣದ ಪ್ರತಿ ದಿನವೂ ಹೊಸತೊಂದು ಸಂಶೋಧನೆಯ ಹುಟ್ಟು. ನಿರಂತರ ಸಂಶೋಧನೆ-ಪ್ರಯೋಗಗಳಿಂದ ೫ ದ್ರಾವಣಗಳಲ್ಲಿ ಪಾರಂಗತಿ ಪಡೆದಿದ್ದಾರೆ. ಸದಾ ಜನರ ಮಧ್ಯೆ ಬೆರೆತು ಹೋಗಿರುವ ಸುಂದರ್ ರಾಮನ್ ಅವರು ತಮ್ಮ ಸಂಶೋಧನೆಯ ದ್ರಾವಣಗಳ ತಯಾರಿಕೆ ಮತ್ತು ಬಳಕೆಯ ಬಗ್ಗೆ ರಾಜ್ಯ-ರಾಜ್ಯಗಳ ನಡುವೆ ಬಿಡುವಿಲ್ಲದಂತೆ ಓಡಾಡುತ್ತಾ ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಡುತ್ತಾರೆ. ಈ ದೇಶದ ಯಾವುದೇ ಭಾಗದಲ್ಲಿ ಬೆಳೆಯುವ ಯಾವುದೇ ಬೆಳೆಯ ಸಂಮೃದ್ಧ ಸಾವಯವ ಕೃಷಿಗೆ ಸುಂದರ್ ರಾಮನ್ ಅವರಲ್ಲಿ ಸರಳ ಸೂತ್ರವಿದೆ. ಅವರ ಪ್ರಾತ್ಯಕ್ಷಿಯ ಸಂದರ್ಭದಲ್ಲೇ ದಾಖಲಿಸಿ ಭಟ್ಟಿ ಇಳಿಸಿ ಸಿದ್ಧಪಡಿಸಿದ ಈ ಪುಸ್ತಿಕೆ ಸುಂದರ್ ರಾಮನ್ ಅವರ ಸಂಶೋಧನೆಯ ದ್ರಾವಣಗಳಿಗೆ ಕೈಪಿಡಿಯಾಗಿದೆ. ಸ್ವತಃ ಸುಂದರ್ ರಾಮನ್ ಅವರೇ ಪಕ್ಕದಲ್ಲಿ ನಿಂತು ಹೇಳಿಕೊಡುತ್ತಿರುವ ಅನುಭವ ಇಲ್ಲಿ ಸಿಗುತ್ತದೆ. 

ಸಾವಯವ ಸಸ್ಯ ಸಂರಕ್ಷಣೆಗೆ ಸರಳ ಸೂತ್ರಗಳು

₹45.00Price
Quantity
    bottom of page