ಬೆಳಗಾಂ ಜಿಲ್ಲೆ ಚಿಕ್ಕೋಡಿ ತಾಲೂಕು ಬೇಡಕಿಹಾಳ್ ನ ಹೆಸರಾಂತ ಸಹಜ ಕೃಷಿಕ ಸುರೇಶ ದೇಸಾಯಿ ಅವರ 40 ವರ್ಷಗಳ ಕೃಷಿ ಸಂಶೋಧನೆ ಇಲ್ಲಿ 7 ಅಧ್ಯಾಯಗಳಲ್ಲಿ ಮೂಡಿಬಂದಿದೆ. ಕೃಷಿಯಲ್ಲಿ ಪಂಚಮಹಾಭೂತಗಳ ಪಾತ್ರವನ್ನು ಅರಿತು ಮಾಡಿದಾಗ ಉತ್ಪಾದನೆ ಹಲವು ಪಟ್ಟು ಹೇಗೆ ಹೆಚ್ಚುತ್ತದೆ ಎಂಬುದನ್ನು ಸುರೇಶ ದೇಸಾಯಿಯವರ ಸಂಶೋಧನೆಗಳು ಕಲಿಸಿಕೊಡುತ್ತವೆ. ಆರೋಗ್ರೀನ್ ಎನ್ನುವ ಬಹುಧಾನ್ಯಗಳ ಹಸಿರು ಗೊಬ್ಬರದ ಚಮತ್ಕಾರವನ್ನೂ ಒಳಗೊಂಡಂತೆ ಇನ್ನೂ ಹಲವು ಚಮತ್ಕಾರಿಕ ವಿಚಾರಗಳು ಇಲ್ಲಿವೆ. ಕಣ್ಣು ತೆರೆಸುವ ಕೃಷಿ ವಿಚಾರಗಳಿಂದ ಈ ಪುಸ್ತಕ ಶ್ರೀಮಂತವಾಗಿದೆ.
ಬೇಸಾಯದ ಕಲೆ- ಸಮೃದ್ಧ ಕೃಷಿ ಪ್ರಯೋಗಗಳು
₹130.00Price
